Posts

Showing posts from May, 2018

ಪುಟಾಣಿ ಕಥೆ 1-10

ಪುಟಾಣಿ ಕಥೆ - ೧ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಲು ನಿರ್ಧಾರ ಮಾಡಿ ಹೊರಟವನು , ದಾರಿಯಲ್ಲೊಬ್ಬನು , ಹೊಸದಾಗಿ ಕೊಂಡ " ಚಪ್ಪಲಿಗಳನ್ನು " ನೋಡಿ ಹಾಗೆ ನಿಂತ !! ಪುಟಾಣಿ ಕತೆ - ೨ ಆಗ ತಾನೆ ಜನಿಸಿದ ಹೆಣ್ಣುಮಗುವನ್ನು ಕಂಡು ಮುಖ ತಿರುಗಿಸಿದ ಅಪ್ಪನನ್ನು ಕಂಡ ಮಗು , " ಮಾಡದ ತಪ್ಪಿಗೆ ಶಿಕ್ಷೆಯೆ ?" ಎಂದು ಅಮ್ಮನೆಡೆಗೆ ನೋಡಿತು !! ಪುಟಾಣಿ   ಕಥೆ  -  ೩ ವೃದ್ಧಾಶ್ರಮಕ್ಕೆ ಅಪ್ಪನನ್ನು ಬಿಟ್ಟು ಬಂದ ಮಗನನ್ನು ಅವನ ಪುಟ್ಟ ಮಗ ಕೇಳಿದ " ನಾನು ದೊಡ್ಡವನಾಗುವುದು ಯಾವಾಗ ?" ಪುಟಾಣಿ   ಕಥೆ  -  ೪ ದೇವರಿಗೆಂದು ಬಗೆಬಗೆಯ ತಿನಿಸುಗಳನ್ನು ಮಾಡುತಿದ್ದ ಅಜ್ಜಿಯನ್ನು , ಅಲ್ಲಿಯೆ ಇದ್ದ ಮೊಮ್ಮಗು ಕೇಳಿತು " ಮಕ್ಕಳೆ ದೇವರಲ್ಲವೆ ಅಜ್ಜಿ ?" ಪುಟಾಣಿ   ಕಥೆ  -  ೫ ಜೀವನದ ಬೇಕು , ಬೇಡ ,  ಆಗು ಹೋಗುಗಳ   ಬಗ್ಗೆ ತಿಳಿಸುತಿದ್ದವಳಿಗೆ ನಗುತ್ತಾ ತಣ್ಣಗೆ ಹೇಳಿದಳು ಗೆಳತಿ " ನೀನೊಬ್ಬಳು ಜೊತೆಗಿದ್ದರೆ ಸಾಕು !" ಪುಟಾಣಿ   ಕಥೆ  -  ೬ ಮಗನ ತುಂಟತನವನ್ನ ತಡೆಯಲಾಗದ ಅಮ್ಮ ಮಗನನ್ನು ಬೈಯಲು , ಮಗ ನಗುತ್ತಾ  " ಅಜ್ಜಿ   ನಿನ್ನನ್ನು ಬೈಯ್ದಿದ್ದರಂತೆ " ಎಂದನು!! ಪುಟಾಣಿ   ಕಥೆ  -  ೭ ಕೈಲಾಗದು ಎಂ...

ವ್ಯಕ್ತಿ ಪರಿಚಯ - ಕಲ್ಯಾಣಮ್ಮ

Image
ಮೂಲತಃ ತಮಿಳಿನವರಾದ ಕಲ್ಯಾಣಮ್ಮನವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ.    ಇವರು ಸಾಹಿತ್ಯ ಸೇವೆಯೊಂದಿಗೆ ಸಮಾಜ ಸೇವೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದರು. ಮಧ್ಯಮ ವರ್ಗದ ಕುಟುಂಬದಲ್ಲಿ ರಾಮಸ್ವಾಮಿ    ಅಯ್ಯಂಗಾರ್    ಮತ್ತು ಜಾನಕಮ್ಮನವರ ಮಗಳಾಗಿ    ಕಲ್ಯಾಣಮ್ಮ  1892  ರಲ್ಲಿ ಜನಿಸಿದರು. ನಂತರ ಇವರನ್ನು    ಆರ್ಯ ಬಾಲಿಕಾ ಶಾಲೆಗೆ ಸೇರಿಸಿದರು. ಇವರು ಕಡಿಮೆ ಮಾತನಾಡುತ್ತಿದ್ದರೂ ಕಲಿಯುವುದರಲ್ಲಿ ಹೆಚ್ಚಿನ    ಆಸಕ್ತಿಯನ್ನು ತೋರುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದುವ ಹವ್ಯಾಸದೊಂದಿಗೆ ಪತ್ರಿಕೆಗಳಿಗೂ ಬರೆಯುತ್ತಿದ್ದರು. ಅಂದಿನ ಬಹು ದೊಡ್ಡ ಸಮಸ್ಯೆ ಎಂದರೆ    ಬಾಲ್ಯವಿವಾಹ ,  ಅದರಂತೆ ಇವರಿಗೂ ಸಹ ಆಡುವ ವಯಸ್ಸಿನಲ್ಲಿಯೇ ಅಂದರೆ   9  ವರ್ಷವಿದ್ದಾಗಲೇ ಮದುವೆಯಾಯಿತು.    ಇದರಿಂದ ವಿದ್ಯಾಭ್ಯಾಸವೂ ಕೊನೆಗೊಂಡಿತು. ಮದುವೆ ,  ಗಂಡ ಎಂದರೆ ಏನು ಎಂದು ತಿಳಿಯದ ಇವರು ಮದುವೆಯಾದ   45  ದಿನಗಳಲ್ಲೇ ವಿಧವೆಯಾದರು. ಅಂದಿನ ಸಂಪ್ರದಾಯಸ್ಥ ಸಮಾಜವು ಕಲ್ಯಾಣಿಯನ್ನು ವಿಧವೆಯೆಂದು ನಾಲ್ಕು ಗೋಡೆಗಳ ನಡುವೆ ಇರುವುದನ್ನು ತಪ್ಪಿಸಿದುದು ಅವರ    ಚಿಕ್ಕಪ್ಪ ಕೃಷ್ಣಯ್ಯಂಗಾರ್. ಪ್ರಾಧ್ಯಾಪಕರಾಗಿದ್ದ ...

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

Image
" ವರದಕ್ಷಿಣೆ ಎಂದರೆ ಮದುವೆಯ ಸಮಯದಲ್ಲಿ ವಧುವಿನ ಜೊತೆ ಕೊಡುವ ಹಣ ಅಥವಾ ಒಡವೆ ಅಥವಾ ಉಡುಗೊರೆ ಮೊದಲಾದವು." ಇದು ವೇದಗಳ ಕಾಲದಲ್ಲಿ ಬಂದುದಾಗಿದೆ. ವೇದಗಳ ಕಾಲಕ್ಕೂ ಮೊದಲು ಸಮಾಜದಲ್ಲಿ ಸ್ತ್ರೀಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ಸ್ಥಾನವಿತ್ತು. ಹಾಗು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿತ್ತು.  ವೇದಗಳ ಆರಂಭದ ಕಾಲದಲ್ಲೂ ಸಹ ಸ್ತ್ರೀಯರಿಗೆ ಸಮಾಜದಲ್ಲಿ ಸಮಾನತೆಯಿತ್ತು ಸ್ತ್ರೀಯರಿಗೆ ಶಿಕ್ಷಣವನ್ನು ನೀಡುತ್ತಿದ್ದರು. ಹಾಗೆ ಎಲ್ಲಾ ಧಾರ್ಮಿಕ ಆಚರಣೆಗಳಲ್ಲೂ ಭಾಗವಹಿಸುತ್ತಿದ್ದರು. ಹೆಣ್ಣುಮಕ್ಕಳು ದೈಹಿಕವಾಗಿ , ಮಾನಸಿಕವಾಗಿ ಸಂಪೂರ್ಣವಾಗಿ ಬೆಳವಣಿಗೆಯಾದ ನಂತರವೆ ವಿವಾಹ ಮಾಡುತ್ತಿದ್ದರು. ಮುಖ್ಯವಾಗಿ ವಿವಾಹದ ಬಗ್ಗೆ ನಿರ್ಧಾರವನ್ನು ಸ್ವತಃ ಅವರೆ ತೆಗೆದುಕೊಳ್ಳುತ್ತಿದ್ದರು.  ಈ ಸಂದರ್ಭದಲ್ಲಿ ಹಲವು ಕಡೆ "ವಧುದಕ್ಷಿಣೆ"ಯನ್ನು ಅಂದರೆ ಹುಡುಗನ ತಂದೆ ಹುಡುಗಿಯ ತಂದೆಗೆ ಹಣ ನೀಡಿ ಮಗನಿಗೆ ವಿವಾಹ ಮಾಡಿಕೊಳ್ಳುತ್ತಿದ್ದರು.  ವೇದಗಳ ಕಾಲದ ಕೊನೆಯ ಭಾಗದಲ್ಲಿ ಸಮಾಜದಲ್ಲಿ ಸ್ತ್ರೀಯರ ಸ್ಥಾನ ಕಡಿಮೆಯಾಗತೊಡಗಿತು. ಶಿಕ್ಷಣ ಸೌಲಭ್ಯ ಮರೆಯಾಯಿತು. ಅವರ ವಿವಾಹದ ವಯಸ್ಸು ಕಡಿಮೆಯಾಯಿತು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಹಾಗು ಹೆಣ್ಣುಮಕ್ಕಳು ರಜಸ್ವಲೆಯಾಗುವ ಮೊದಲೆ ಅವಳ ವಿವಾಹವನ್ನು ಮಾಡುತ್ತಿದ್ದರು. "ಕನ್ಯಾದಾನ"ದ ಮೂಲಕ ಮಗಳನ್ನು ಗಂಡಿಗೆ ದಾನ ಕೊ...

ಪುಸ್ತಕ ಪರಿಚಯ - ನಿರಕ್ಷರಿಯ ಆತ್ಮಕಥೆ

Image
ಅವಿದ್ಯಾವಂತೆಯಾಗಿದ್ದರೂ ವಿವಾಹಾನಂತರ ಅಕ್ಷರ ಕಲಿತು ಬೇಬಿ ಹಾಲ್ದಾರ್ ರವರ ಆತ್ಮಕಥೆ ಆಲೋ-ಅಂಧೇರೆ  ( ಬೆಳಕು ಕತ್ತಲೆ) ಯನ್ನು ಓದಿ ತಮ್ಮ ಆತ್ಮಕಥೆಯನ್ನು ಹೆಸರು ಬದಲಾಯಿಸಿ ಬರೆದ ಸುಶೀಲ್ ರಾಯ್ ರವರ "ನಿರಕ್ಷರಿಯ ಆತ್ಮಕಥೆ" ( ಏಕ್ ಅನ್ ಪಡ್ ಕೀ   ಕಹಾನಿ)   ಯನ್ನು ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಒಬ್ಬ ಅಣ್ಣ ಮತ್ತು ಇಬ್ಬರು ತಮ್ಮಂದಿರ ನಡುವೆ ಹುಟ್ಟಿದ ಊರ್ಮಿಳಾ ನೋಡಲು ಕಪ್ಪಾಗಿದ್ದಳು. ತಂದೆ ಓದು ಬರಹ ಬಲ್ಲವರಾಗಿದ್ದರೂ   ಮಗಳನ್ನು ಓದಿಸದೆ ಮದುವೆ ಮಾಡಬೇಕೆಂದು ಯೋಚಿಸುತ್ತಿದ್ದರು. ಬಹುಶಃ   ಊರ್ಮಿಳಾಳ ಬಣ್ಣ ಇದಕ್ಕೆ ಕಾರಣವೇನೋ.! ಹುಡುಗ ಇವಳನ್ನು ನೋಡದೆ ಹಿರಿಯರು ನಿಶ್ಚಯಿಸಿದ ಮದುವೆಗೆ ಒಪ್ಪಿಗೆಯನ್ನಿತ್ತ ಅವಿನಾಶ್. ಮದುವೆಯಂದು ಹುಡುಗಿಯನ್ನು ನೋಡಿ ನನಗೆ ತಕ್ಕವಳಲ್ಲ ಎಂದು ನೊಂದುಕೊಂಡನು. ಆದರೆ ಮದುವೆಯನ್ನು ನಿಲ್ಲಿಸಲಿಲ್ಲ. ಅಂದು ಆ ಮದುವೆಯೇನಾದರೂ ನಡೆಯದಿದ್ದರೆ ಇಂದು ಈ ಕಥೆ ನಮ್ಮ ಮುಂದೆ ಇರುತ್ತಿರಲಿಲ್ಲ. ಮದುವೆಯಾಗಿ ಗಂಡನ ಮನೆಗೆ ಹೊರಟ ಊರ್ಮಿಳಾಳಿಗೆ ಮನದಲ್ಲಿ ತಳಮಳ ಪ್ರಾರಂಭವಾಯಿತು. ಇಷ್ಟವಿಲ್ಲದಿದ್ದರೂ ಮದುವೆಯಿಂದ ಗಂಡ ಮುಂದೆ ಹೇಗೋ ? ಏನೋ ? ಎನ್ನು ವಿಚಾರ ಮನದಲ್ಲಿ ತುಂಬಿತ್ತು. ತನ್ನ ಮನೆಗೆ ಬಂದ ಅವಿನಾಶ್ ಅಜ್ಜ , ಅಪ್ಪನ ಮೇಲೆ ಕೂಗಾಡಿದನು. "ವರದಕ್ಷಿಣೆಯಾಗಿ ಕೊಟ್ಟಿರುವ ವಸ್ತುಗಳನ್ನು ನಾನೇ ತಂದು ಕೊಡುತ್ತಿದ್ದೆ , ನಿಮ್ಮಿಂದ ನನ...

ವ್ಯಕ್ತಿ ಪರಿಚಯ - ಕುದ್ಮಲ್ ರಂಗರಾವ್

Image
ಬ್ರಾಹ್ಮಣ   ಕುಟುಂಬದಲ್ಲಿ   ಜನಿಸಿ ,  ಸಮಾಜದ   ಅಮಾನವೀಯ   ಪಿಡುಗಾಗಿದ್ದ       ಅಸ್ಪೃಶತಾ   ಆಚರಣೆಯ   ವಿರುದ್ಧ   ಹಾಗೂ   ದಲಿತರ   ಜೀವನ   ಸುಧಾರಣೆಗಾಗಿ    ಅವಿರತ   ಶ್ರಮಿಸಿದವರು   ಕುದ್ಮಲ್   ರಂಗರಾವ್   ರವರು .  ಇವರು   ಹಿಂದೆ   ದಕ್ಷಿಣ    ಕನ್ನಡ   ಜಿಲ್ಲೆಗೆ   ಸೇರಿದ್ದ   ಕಾಸರಗೂಡಿನ   ಕುದ್ಮುಲ್   ನಲ್ಲಿ  19  ಜೂನ್  1859  ರಲ್ಲಿ   ಜನಿಸಿದರು .  ದೇವಪ್ಪಯ್ಯ   ಮತ್ತು   ಗೌರಿಯವರ   ಹಿರಿಯ   ಮಗನಾಗಿ   ಜನಿಸಿದ    ರಂಗರಾವ್   ರವರು   ಪ್ರಾಥಮಿಕ   ಶಿಕ್ಷಣವನ್ನು   ಕುದ್ಮಲ್   ಮತ್ತು   ಕಾಸರಗೂಡಿನಲ್ಲಿ   ಮುಗಿಸಿದರು .  ಮನೆಯಲ್ಲಿ   ಕೊಂಕಣಿಯನ್ನು   ಮಾತನಾಡುತ್ತಿದ್ದರು ,  ಶಿಕ್ಷಣವನ್ನು    ಕನ್ನಡದಲ್ಲಿ   ಪಡೆದರು .  ಚಿಕ್ಕ   ವಯಸ್ಸಿನಲ್ಲಿಯೇ   ತಂದೆಯನ್ನು   ಕಳೆದುಕೊಂಡ   ಇವರು   ಸಂಸಾರದ   ಜವಾಬ್ದಾರಿಯನ್ನು   ತೆಗೆದುಕೊಳ್ಳ ಬೇಕಾಯಿತು .  ಮುಂದೆ ...