" ನನ್ನ ಮಟ್ಟಿಗೆ ನನಗೆ ಹಾಸ್ಯದ ಮುಖವಾಡವೇ ಬೇಕು ಎನಿಸುತ್ತದೆ. ನನಗೆ ಅದು ಸಹಜ ನನಗೊಂದು ವಕ್ರದೃಷ್ಟಿಯಿದೆ ಐರಾವತಕ್ಕೂ ಅಡಿಜಾರುತ್ತೇ...ಹಾಸ್ಯದೃಷ್ಟಿಯ ಭೂತಕನ್ನಡಿಯಲ್ಲಿ ಜನರು ನಿಸ್ಸಂಕೋಚವಾಗಿ ತಮ್ಮನ್ನು ತಾವೇ ನೋಡಿಕೊಳ್ಳಲು ಬಹಳ ಸುಲಭ. ತಮ್ಮನ್ನು ನೋಡಿ ತಾವೇ ನಗುತ್ತಾರೆ. ಹಾಸ್ಯದ ಗಮ್ಯ ಉಲ್ಲಾಸ , ರೋಗಿಗೆ ಪಥ್ಯವಿದ್ದಂತೆ. ಜನಕ್ಕೆ ಮನಸ್ಸು ಕುಗ್ಗಿದಾಗ ಹಾಸ್ಯ ಅದನ್ನು ಅರಳಿಸುತ್ತದೆ. ಲೋಕ ಜಡವಾದಾಗ ಹಾಸ್ಯ ಅದನ್ನು ಚೇತರಿಸುತ್ತದೆ.... ಹಾಸ್ಯ ನಿರ್ಮಲವಾಗದಿದ್ದರೆ ಹಾಸ್ಯ ಅಪಹಾಸ್ಯವಾಗಿ ವಿಘಾತವಾಗಿ ಪರಿಣಮಿಸುತ್ತದೆ. ಶಸ್ತ್ರವೈದ್ಯನ ಶಸ್ತ್ರದಂತೆ ಹಾಸ್ಯ ಅನನ್ಯ ಚಿತ್ರವಾಗಿರಬೇಕು." ಹೀಗೆಂದವರು ಪ್ರಸಿದ್ಧ "ಪ್ರಹಸನ ಪಿತಾಮಹ" ಟಿ.ಪಿ.ಕೈಲಾಸಂ ರವರು. ಇವರು ಅಂದಿನ ಸಮಾಜದ ರೀತಿನೀತಿಗಳನ್ನು ತಿಳಿಸಲೋಸಗ ಹೊಸ ಪ್ರಯತ್ನವನ್ನು ಮಾಡಿದರು.ಅದುವೇ ಇಂಗ್ಲಿಷ್ ಭಾಷೆ ಮಿಶ್ರಿತ ವಿಶಿಷ್ಟ ಶೈಲಿಯ ನಾಟಕಗಳು. ಅವುಗಳಲ್ಲಿ " ಟೊಳ್ಳುಗಟ್ಟಿ "ಎನ್ನುವ ನಾಟಕವನ್ನು ನಿಮಗೆ ಪರಿಚಯಿಸುತ್ತೇನೆ. ಇದರಲ್ಲಿ ಒಬ್ಬೊಬ್ಬರ ಮೂಲಕ ಒಂದೊಂದು ಸಂದೇಶವನ್ನು ನೀಡಿದ್ದಾರೆ. ತಂದೆ ಹಿರಿಯಣ್ಣ. ತಾಯಿ ಭಾಗೀರಥಮ್ಮ , ಹಿರಿಮಗ ಪುಟ್ಟು ಜಾಣ ಓದಿನಲ್ಲಿ ಮುಂದು , ಇನ್ನೊಬ್ಬ ಮಾಧವ ಓದಿನಲ್ಲಿ ಹಿಂದಾದರೂ ಎಲ್ಲರಿಗೂ ಸಹಾಯಹಸ್ತ ನೀಡುತ್ತಿದ್ದ. ತಂಗಿ ನಾಗಮ್ಮ ವಿಧವೆ. ಇಬ್ಬರು ಸೊಸೆಯಂದಿರು ಪಾತು ಮತ್ತು ಸಾತು. ಹಿ...
" ವರದಕ್ಷಿಣೆ ಎಂದರೆ ಮದುವೆಯ ಸಮಯದಲ್ಲಿ ವಧುವಿನ ಜೊತೆ ಕೊಡುವ ಹಣ ಅಥವಾ ಒಡವೆ ಅಥವಾ ಉಡುಗೊರೆ ಮೊದಲಾದವು." ಇದು ವೇದಗಳ ಕಾಲದಲ್ಲಿ ಬಂದುದಾಗಿದೆ. ವೇದಗಳ ಕಾಲಕ್ಕೂ ಮೊದಲು ಸಮಾಜದಲ್ಲಿ ಸ್ತ್ರೀಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ಸ್ಥಾನವಿತ್ತು. ಹಾಗು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿತ್ತು. ವೇದಗಳ ಆರಂಭದ ಕಾಲದಲ್ಲೂ ಸಹ ಸ್ತ್ರೀಯರಿಗೆ ಸಮಾಜದಲ್ಲಿ ಸಮಾನತೆಯಿತ್ತು ಸ್ತ್ರೀಯರಿಗೆ ಶಿಕ್ಷಣವನ್ನು ನೀಡುತ್ತಿದ್ದರು. ಹಾಗೆ ಎಲ್ಲಾ ಧಾರ್ಮಿಕ ಆಚರಣೆಗಳಲ್ಲೂ ಭಾಗವಹಿಸುತ್ತಿದ್ದರು. ಹೆಣ್ಣುಮಕ್ಕಳು ದೈಹಿಕವಾಗಿ , ಮಾನಸಿಕವಾಗಿ ಸಂಪೂರ್ಣವಾಗಿ ಬೆಳವಣಿಗೆಯಾದ ನಂತರವೆ ವಿವಾಹ ಮಾಡುತ್ತಿದ್ದರು. ಮುಖ್ಯವಾಗಿ ವಿವಾಹದ ಬಗ್ಗೆ ನಿರ್ಧಾರವನ್ನು ಸ್ವತಃ ಅವರೆ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಹಲವು ಕಡೆ "ವಧುದಕ್ಷಿಣೆ"ಯನ್ನು ಅಂದರೆ ಹುಡುಗನ ತಂದೆ ಹುಡುಗಿಯ ತಂದೆಗೆ ಹಣ ನೀಡಿ ಮಗನಿಗೆ ವಿವಾಹ ಮಾಡಿಕೊಳ್ಳುತ್ತಿದ್ದರು. ವೇದಗಳ ಕಾಲದ ಕೊನೆಯ ಭಾಗದಲ್ಲಿ ಸಮಾಜದಲ್ಲಿ ಸ್ತ್ರೀಯರ ಸ್ಥಾನ ಕಡಿಮೆಯಾಗತೊಡಗಿತು. ಶಿಕ್ಷಣ ಸೌಲಭ್ಯ ಮರೆಯಾಯಿತು. ಅವರ ವಿವಾಹದ ವಯಸ್ಸು ಕಡಿಮೆಯಾಯಿತು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಹಾಗು ಹೆಣ್ಣುಮಕ್ಕಳು ರಜಸ್ವಲೆಯಾಗುವ ಮೊದಲೆ ಅವಳ ವಿವಾಹವನ್ನು ಮಾಡುತ್ತಿದ್ದರು. "ಕನ್ಯಾದಾನ"ದ ಮೂಲಕ ಮಗಳನ್ನು ಗಂಡಿಗೆ ದಾನ ಕೊ...
ಸೋಲು - ಗೆಲುವು ನಾಣ್ಯದ ಎರಡು ಮುಖ ಗೆದ್ದವರಿಗಿಲ್ಲಿ ಸಿಗುವುದು ಪದಕ ಸೋತವರಿಗೆ ಆಗುವುದು ದುಃಖ ತಿಳಿದರೆ ಸೋಲು ಗೆಲುವಿನ ಸೋಪಾನ ಮಾಡಿದರೆ ತಪ್ಪೆಲಿದೆಯೆಂಬ ಚಿಂತನ ಮುಂದೆ ಬರುವುದು ಗೆಲುವಿನ ಸುಮ್ಮಾನ
Comments
Post a Comment